To fight in the 2018 Karnataka assembly elections, Karnataka chief minister Siddaramaiah seem to have hit upon a strategy centered around Kannada pride to take on BJP. <br /> <br />ಅನಿರೀಕ್ಷಿವಾಗಿ ಚುನಾವಣೆ ಸಮೀಪಿಸುತ್ತಿರುವಾಗಲೇ ಕನ್ನಡ ಧ್ವಜದ ಕೂಗನ್ನು ರಾಷ್ಟ್ರ ಮಟ್ಟಕ್ಕೆ ಮುಟ್ಟಿಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಈ ಹಿನ್ನಲೆಯಲ್ಲಿ, ಜಾತಿ ಮತ್ತು ಹಣಬಲದಲ್ಲೇ ಮುಳುಗೇಳುವ ಚುನಾವಣೆಗಳ ಮಧ್ಯೆ ಕನ್ನಡ ಮತ್ತು ಕನ್ನಡಿಗರ ಭಾವನಾತ್ಮಕತೆಯನ್ನೇ ಸರಕು ಮಾಡಿಕೊಳ್ಳಲು ಹೊರಟಿದ್ದಾರಾ ಸಿದ್ದರಾಮಯ್ಯ ಎಂಬ ಅನುಮಾನಗಳೂ ಕಾಡುತ್ತಿವೆ. <br />ಕನ್ನಡ ಪ್ರೇಮ ಮತ್ತು ಕರ್ನಾಟಕದ ವಿಚಾರದಲ್ಲಿ ಪದೇ ಪದೇ ಬಿಜೆಪಿ ಜನರ ಆಕ್ರೋಶಕ್ಕೆ ಆಹಾರವಾಗುತ್ತಿರುವುದು ನೋಡಿದಾಗ ಕಾಂಗ್ರೆಸ್ ತಂತ್ರ ಯಶಸ್ವಿಯಾಗುತ್ತಿರುವುದರ ಮುನ್ಸೂಚನೆಗಳನ್ನು ಕಾಣಿಸುತ್ತಿವೆ; ಹೀಗಾಗಿ 'ಕನ್ನಡ ರಾಜಕಾರಣ'ವನ್ನು ಸಿದ್ದರಾಮಯ್ಯ ಗಟ್ಟಿಯಾಗಿ ಅಪ್ಪಿಕೊಂಡರೆ ಅಚ್ಚರಿಯಿಲ್ಲ. <br /> <br />